Friday, January 05, 2007

ನುಡಿಮುತ್ತುಗಳು - ಸ್ವಾಮಿ ವಿವೇಕಾನಂದ - ಭಾಗ ೧

(ಸ್ವಾಮಿ ವಿವೇಕಾನಂದರ ಆಯ್ದ ಕೆಲವು ನುಡಿಮುತ್ತುಗಳ ಕನ್ನಡ ಅನುವಾದ ಇಲ್ಲಿದೆ. ಈ ರೀತಿಯ ನುಡಿಮುತ್ತುಗಳನ್ನು ದಿನವೂ ಸಂಪದದಲ್ಲಿ ಬರೆಯುತ್ತಿರುತ್ತೇನೆ. ಆಸಕ್ತಿಯಿದ್ದಲ್ಲಿ ಈ ಕೊಂಡಿ ನೋಡಿ: http://www.sampada.net/quotes/1261)

ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?!- ಸ್ವಾಮಿ ವಿವೇಕಾನಂದ

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!- ಸ್ವಾಮಿ ವಿವೇಕಾನಂದ

ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಗತಿಯ ಮೊದಲ ಗುರುತು ಸದಾ ಹಸನ್ಮುಖಿಯಾಗಿರುವುದು!- ಸ್ವಾಮಿ ವಿವೇಕಾನಂದ

ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ.- ಸ್ವಾಮಿ ವಿವೇಕಾನಂದ

ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು.- ಸ್ವಾಮಿ ವಿವೇಕಾನಂದ

ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!- ಸ್ವಾಮಿ ವಿವೇಕಾನಂದ

7 comments:

Unknown said...

hats off!!! to you glorious son mother india,let my head always be at your feet

Anonymous said...

thank u for giving hart touching thoughts ,,,,,,,,,,,,,,,

Rani feeling my love said...

Rani
thankn you for giving mind touchable words

Anonymous said...

thank u for giving this type of information ...... this is very useful for youths.....thanks a lot......

vishwanath maiya said...

i am very proud that mother had sach a great son who showed the world that love wins all.

Sushma Sindhu said...

I stumbled across your blog while browsing for kannada translations of 'viveka vani'. Was quite helpful.Please continue blogging
Regards
~Sushma

Anonymous said...

thanks