tag:blogger.com,1999:blog-340866222024-03-07T20:01:46.528+13:00ಮನದ ಮಾತುಮನಸಿನ ಪಿಸುಮಾತುಗಳನ್ನು ಕೇಳೋಣ ಬನ್ನಿ...ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.comBlogger25125tag:blogger.com,1999:blog-34086622.post-71236800948410707982007-03-12T23:40:00.000+13:002007-03-12T23:42:13.557+13:00ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು!ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.ಹಳೆಯ ಗಾದೆ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ.ಹೊಸ ರೂಪ: ಮನಮೋಹನ ವರ ಕೊಟ್ಟರೂ ಸೋನಿಯಾ ಕೊಡಲಿಲ್ಲ!ಹಳೆಯ ಗಾದೆ: ಹುಚ್ಚನ ಮದುವೇಲಿ ಉಂಡೋನೇ ಜಾಣ.ಹೊಸ ರೂಪ: ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಪದವಿ ಗಿಟ್ಟಿಸಿದೋನೇ ಜಾಣ.ಹಳೆಯ ಗಾದೆ: ಮಳ್ಳಿ ಮಳ್ಳಿ, ಮಂಚಕ್ಕೆಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅಂದಳಂತೆ.ಹೊಸ ರೂಪ: ಪುಢಾರಿ ಪುಢಾರಿ, ನಿನ್ನ ಸ್ವಿಸ್ ಬ್ಯಾಂಕಲ್ಲಿರೋ ಹಣ ಎಷ್ಟು ಅಂದ್ರೆ ಮೂರುಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com8tag:blogger.com,1999:blog-34086622.post-32144039979888056442007-03-12T23:37:00.000+13:002007-03-12T23:38:59.619+13:00ಹನಿಗವನ: ಎತ್ತಲಾಗದ ಬಿಲ್ಲುತ್ರೇತಾಯುಗದಲ್ಲಿ ಸೀತೆಯನ್ನು ವರಿಸಲುರಾಮ ಮುರಿದೇಬಿಟ್ಟ ಶಿವನ ಬಿಲ್ಲು;ದ್ವಾಪರದಲ್ಲಿ ದ್ರೌಪದಿಯನ್ನು ವರಿಸಲುಅರ್ಜುನನೂ ಬಳಸಿದನೊಂದು ಬಿಲ್ಲು;ಅವೆಲ್ಲ ಒಮ್ಮೆ ಮಾತ್ರದ ಕೆಲಸ ಬಿಡಿಈ ಕಲಿಯುಗದಲ್ಲಿ ನಾನು ಪ್ರತಿವಾರವೂಎತ್ತುತ್ತಿದ್ದೇನೆ ನನ್ನವಳ ಷಾಪಿಂಗ್ ಬಿಲ್ಲು!(ಬರೆದದ್ದು: ೧೦-ಜನವರಿ-೨೦೦೭)ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com1tag:blogger.com,1999:blog-34086622.post-2575203655071992072007-03-12T23:36:00.000+13:002007-03-12T23:37:29.121+13:00ಆಣೆ ಯಾಕೋ ನಾಕಾಣೆಹುಡುಗಿ ಹೇಳಿದಳು ತನ್ನ ಪ್ರೀತಿಯ ಹುಡುಗನಿಗೆ -"ಪ್ರಿಯಾ, ನಾ ನಿನ್ನ ಪ್ರೀತಿಸುವೆ ಪ್ರಾಣಕ್ಕಿಂತ ಹೆಚ್ಚು,ನನ್ನನ್ನು ನಂಬು; ಬೇಕಿದ್ದರೆ ಆ ದೇವರ ಮೇಲಾಣೆ,ಭೂತಾಯಿ ಮೇಲಾಣೆ. ಇನ್ನೂ ಅನುಮಾನ ಏಕೆ?"ಆ ಹುಡುಗ ಉಪ್ಪಿ ಅಭಿಮಾನಿ; ಕೇಳಿದ ತಣ್ಣಗೆ - "ಹುಚ್ಚು ಹುಡುಗಿ ನೀನು; ಪ್ರೀತಿ ಓಕೆ, ಆಣೆ ಯಾಕೆ?"(ಬರೆದದ್ದು: ೨೯-ಜನವರಿ-೨೦೦೭) ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-21604232630369704402007-03-12T23:34:00.000+13:002007-03-12T23:35:34.815+13:00ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು ನಿಂದಿಸಿದ. ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-37242924148634147602007-03-12T23:29:00.000+13:002007-03-12T23:32:58.390+13:00ಅಜ್ಜ ಎಂದೊಡನೆ...ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ, ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.ಅಜ್ಜ ಎಂದೊಡನೆ - ತಿಥಿ, ನಕ್ಷತ್ರ, ಸಂವತ್ಸರ, ಸ್ತೋತ್ರ,ಅಮರಕೋಶದ ಪಾಠಕ್ಕೆಳೆದು ಕೂರಿಸಿದಂತೆ.ದಾಳಿಂಬೆಯ ಪ್ರತಿ ಕಾಳನ್ನೂ ಎಣಿಸುತ್ತಾ ಬಿಡಿಸಿ,ಸುತ್ತಲೂ ಕುಳಿತ ಮೊಮ್ಮಕ್ಕಳಿಗೆ ರೇಗಿಸುತ್ತಾ ತಿನಿಸಿದ ನೆನಪು.ಅಜ್ಜ ಎಂದೊಡನೆ - ಹೂಗಿಡಗಳ ಜತೆ ಮಾತಾಡುತ್ತಾಹೂಬಿಡಿಸಿ ತಂದು, ಮತ್ತಷ್ಟು ಶ್ರದ್ಧೆಯಿಂದದೇವರ ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com1tag:blogger.com,1999:blog-34086622.post-55335693471140976902007-01-26T11:35:00.000+13:002007-01-26T11:37:52.968+13:00ಗಣಪತಿಯ ಇನ್ನೊಂದು ರೇಖಾಚಿತ್ರಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com2tag:blogger.com,1999:blog-34086622.post-78883288161690240472007-01-25T20:06:00.000+13:002007-01-25T20:07:47.457+13:00ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ! ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳುತ್ತಿದ್ದ. ಆ ಊರಿನಲ್ಲಿ ಚಿಕ್ಕ ನಾಣ್ಯದ ಬೆಲೆ ದೊಡ್ಡ ನಾಣ್ಯಕ್ಕಿಂತ ಕಡಿಮೆ. ಹಾಗಾಗಿ ಮುಲ್ಲಾನ ಈ ಆಯ್ಕೆ ಎಲ್ಲರಿಗೂ ಬಹಳ ತಮಾಶೆಯಾಗಿ ಕಾಣುತ್ತಿತ್ತು. ಜನ ನಾ ಮುಂದು, ತಾ ಮುಂದು ಅನ್ನುವಂತೆ ಮುನ್ನುಗ್ಗಿ ಭಿಕ್ಷೆ ಹಾಕಿ ಮಜ ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com1tag:blogger.com,1999:blog-34086622.post-28920527100825965962007-01-25T19:59:00.000+13:002007-01-25T20:08:19.974+13:00ಸುಮ್ನೆ ನಗೋಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು ಮೊನ್ನೆ, ಒಬ್ಬರಿಂದೊಬ್ಬರಿಗೆ ಬರುವ "ಸರಪಳಿ ವಿ-ಪತ್ರ"ವೊಂದು ಬಂತು ("ಫಾರ್ವರ್ಡ್ ಈ-ಮೈಲ್" ಇಲ್ಲವೇ, ಅದಕ್ಕೆ ನಾನು ಇಟ್ಟಿರುವ ಹೆಸರು). ಸಾಮಾನ್ಯವಾಗಿ ಈ ರೀತಿಯ ಪತ್ರಗಳ ಮೂಲ ಹುಡುಕೋದು ಅಸಾಧ್ಯ ಬಿಡಿ. ಅದರಲ್ಲಿ ಇದ್ದ ವಿಚಾರ: "ಹಾಲಿವುಡ್ ಸಿನೆಮಾಗಳನ್ನು ಕನ್ನಡದಲ್ಲಿ ತೆಗೆದರೆ, ಅವುಗಳ ಹೆಸರುಗಳು ಹೇಗಿರಬಹುದು?" ಅಂತ! ಸುಮ್ನೆ ನಕ್ಕು ಮರೆಯೋದಕ್ಕೆ ಒಳ್ಳೆಯ ವಿಷಯ ಅನ್ನಿಸಿತು. ಅದರಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ಇಲ್ಲಿರುವ ಎಲ್ಲ ಹೆಸರುಗಳೂ ಯಥಾವತ್ ಅನುವಾದಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-48758684978921635512007-01-25T19:53:00.000+13:002007-01-25T19:55:06.806+13:00ಈ ದೇಹ ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆಇದೊಂದು ಸರಳ, ಸುಂದರ ಕಥೆ. ಆದರೆ ಅಷ್ಟೇ ಅರ್ಥವುಳ್ಳದ್ದು ಕೂಡ. ಇದು ಸಿದ್ಧಾರ್ಥ ಗೌತಮ ಬದ್ಧನಾಗಲು ಕಾರಣವಾದ ಘಟನೆ ಅಂತ ಕೆಲವು ಮೂಲಗಳಲ್ಲಿ ಹೇಳಿದ್ದರೆ, ಇನ್ನು ಕೆಲವೆಡೆ ಗೌತಮ ಬುದ್ಧ ತನ್ನ ಶಿಷ್ಯಂದಿರಿಗೆ ಉಪದೇಶ ನೀಡಲು ಬಳಸಿದ ಕಥೆ ಅಂತ ಹೇಳಿದೆ. ಯಾವುದು ಸರಿ ಅನ್ನುವ ಚರ್ಚೆ ನಮಗೇಕೆ ಅಲ್ಲವೇ? ಏಕೆಂದರೆ ಎರಡು ವಾದಗಳಿಗೂ ಖಚಿತ ಪುರಾವೆಗಳಿಲ್ಲ. ಹಾಗೆ ನೋಡಿದರೆ ಬುದ್ಧನ ಕಾಲದ ಬಗೆಗೇ ಇನ್ನೂ ಇತಿಹಾಸಕಾರರು ಚರ್ಚೆ ಮಾಡುತ್ತಾ ಇದ್ದಾರೆ. ಸಾಕು, ನಿನ್ನ ಮಾತೇ ಬಹಳ ಆಯಿತು, ಕಥೆ ಮುಂದುವರೆಸು ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-33222346870977751782007-01-05T12:24:00.000+13:002007-01-25T20:03:01.433+13:00ಸಂಸ್ಕೃತ ಸುಭಾಷಿತಗಳು - ಭಾಗ ೧ಸರಸ್ವತಿಯೇ, ನಿನ್ನ ಬಳಿ ವಿದ್ಯೆಯೆಂಬ ಅಪರೂಪದ ಭಂಡಾರವೊಂದಿದೆ.ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ.ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ!- ಸಂಸ್ಕೃತ ಸುಭಾಷಿತಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ.ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ.ಸ್ವಾತಿ ನಕ್ಷತ್ರದಲ್ಲಿಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com6tag:blogger.com,1999:blog-34086622.post-17891850000646591012007-01-05T12:04:00.000+13:002007-01-25T20:03:37.708+13:00ನುಡಿಮುತ್ತುಗಳು - ಸ್ವಾಮಿ ವಿವೇಕಾನಂದ - ಭಾಗ ೧(ಸ್ವಾಮಿ ವಿವೇಕಾನಂದರ ಆಯ್ದ ಕೆಲವು ನುಡಿಮುತ್ತುಗಳ ಕನ್ನಡ ಅನುವಾದ ಇಲ್ಲಿದೆ. ಈ ರೀತಿಯ ನುಡಿಮುತ್ತುಗಳನ್ನು ದಿನವೂ ಸಂಪದದಲ್ಲಿ ಬರೆಯುತ್ತಿರುತ್ತೇನೆ. ಆಸಕ್ತಿಯಿದ್ದಲ್ಲಿ ಈ ಕೊಂಡಿ ನೋಡಿ: http://www.sampada.net/quotes/1261)ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com7tag:blogger.com,1999:blog-34086622.post-52654830839488518762007-01-05T11:57:00.000+13:002007-01-05T12:03:12.283+13:00ಕರ್ನಾಟಕದ ಸುಂದರ ಚಿತ್ರಗಳುಳ್ಳ ಒಂದು "ಸ್ಕ್ರೀನ್ ಸೇವರ್"ಇತ್ತೀಚೆಗೆ "ದಟ್ಸ್ಕನ್ನಡ"ದಲ್ಲಿ ಕರ್ನಾಟಕದ ಹಲವು ಸುಂದರ ತಾಣಗಳ ಚಿತ್ರಗಳುಳ್ಳ ಒಂದು "ಸ್ಕ್ರೀನ್ ಸೇವರ್" ನೋಡಿದೆ. ಚೆನ್ನಾಗಿದೆ ಅಂತ ನನಗನ್ನಿಸಿತು. ಇನ್ನೂ ಯಾರಿಗಾದರೂ ಉಪಯೋಗವಾದೀತು ಅಂತ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಅದರ ಕೊಂಡಿ ಇಲ್ಲಿದೆ //http://thatskannada.oneindia.in/screensaver/karnataka.exeಸೂಚನೆ: ಇದು ".exe" ಫೈಲ್ ಆದ್ದರಿಂದ ಒಮ್ಮೆ ಸರಿಯಾಗಿ ನೋಡಿ ಆಮೇಲೆ ಡೌನ್ಲೋಡ್ ಮಾಡಿಕೊಳ್ಳಿ. ಆಕಸ್ಮಾತ್ ಇದರ ಸ್ಥಳ ಬದಲಾಗಿದ್ದು ಇನ್ನೇನಾದರೂ ".exe" ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-54625810832896779642007-01-05T10:59:00.000+13:002007-01-05T11:09:06.229+13:00ಶ್ರೀ ಗುರುಭ್ಯೋ ನಮಃ ಹರಿಃ ಓಂ....ಸೆಪ್ಟೆಂಬರ್ 5 "ಶಿಕ್ಷಕರ ದಿನಾಚರಣೆ" ಅನ್ನೋದು ಎಲ್ಲರಿಗೂ ತಿಳಿದಿರೋ ವಿಷಯ (ಗೊತ್ತಿರಲಿಲ್ಲ ಅಂದರೆ ಇದನ್ನು ಓದುವಾಗ ಗೊತ್ತಾಯಿತಲ್ಲ, ಬಿಡಿ!). ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಎಂತಹ ಮಜಾ ಇರುತ್ತಿತ್ತು ಅಲ್ವಾ? ಗೆಳೆಯ-ಗೆಳತಿಯರು, ಸ್ಕೂಲ್ ಡೇಗಳು, ಪ್ರವಾಸಗಳು, ಹೋಟೆಲ್ಲು-ಸಿನೆಮಾಗಳು, ಇವೆಲ್ಲದರ ಮಧ್ಯೆ ಯಾಕಾದರೂ ಬರುತ್ತವೋ ಅನ್ನುವ ಪರೀಕ್ಷೆಗಳು, ಕೊನೆಗೆ ಅಗಲುವಾಗ ಕಣ್ಣಂಚಿನಲ್ಲಿ ಹೊರಬರಲೋ ಬೇಡವೋ ಎನ್ನುವಂತೆ ಒಂದು ಹನಿ ಕಣ್ಣೀರು, ಆಟೋಗ್ರಾಫ್ ಪುಸ್ತಕಗಳು...ಹೀಗೇ ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com3tag:blogger.com,1999:blog-34086622.post-34552393129247344122007-01-05T10:56:00.000+13:002007-01-25T19:58:21.584+13:00ಗೃಹಲಕ್ಷ್ಮಿಗೆನಿನ್ನವರೆಲ್ಲರ ಆರೈಕೆಯಲ್ಲಿ, ಬೇಕು-ಬೇಡಗಳಲ್ಲಿ,ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲುಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!ಹೊರಗಿನುದ್ಯೋಗಗಳಲ್ಲಿ ನಮಗುಂಟು ನೂರೆಂಟು ರಜೆ,ಮನೆಗೆಲಸದಲ್ಲಿ ನೀ ಹಾಕಿದರೆ ರಜೆ, ಎಲ್ಲರಿಗದು ಸಜೆ!ಎಲ್ಲರ ಯಶಸ್ಸಿನ ಹಿಂದೆ ಕಂಡೂ ಕಾಣದಂತೆ ನೀನಿರಲುಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?ಇಲ್ಲ, ನಿನಗೊಪ್ಪುವ ಹೆಸರು "ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com1tag:blogger.com,1999:blog-34086622.post-678936045045750572007-01-05T10:53:00.000+13:002007-01-05T10:54:42.993+13:00ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆಹಾಸ್ಯವನ್ನು ಎಲ್ಲೋ ಹುಡುಕಿಕೊಂಡು ಹೋಗುವುದಕ್ಕಿಂತ, ದೈನಂದಿನ ಆಗುಹೋಗುಗಳನ್ನೇ ಸ್ವಲ್ಪ ಎಚ್ಚರದಿಂದ ಗಮನಿಸುತ್ತಿದ್ದರೆ ಅದರಲ್ಲಿ ಸಿಗುವಷ್ಟು ತಿಳಿಯಾದ, ತಾಜಾ ಹಾಸ್ಯ ಇನ್ನೆಲ್ಲೂ ಸಿಗೋದಿಲ್ಲ ಅಂತ ನನ್ನ ಅಜ್ಜ ಮತ್ತು ಅಪ್ಪ ಪದೇ ಪದೇ ಹೇಳುತ್ತಿದ್ದರು. ಹಾಗೆ ನಿಜಜೀವನದಲ್ಲಿ ಕಂಡ ಒಂದೆರಡು ಹಾಸ್ಯ ಸನ್ನಿವೇಶಗಳು ಇಲ್ಲಿವೆ.ನಮ್ಮಜ್ಜ ಹೈಸ್ಕೂಲು ಉಪಾಧ್ಯಾಯರಾಗಿದ್ದಾಗ ನಡೆದ ಘಟನೆಯಂತೆ ಇದು. ಕನ್ನಡ ಪರೀಕ್ಷೆ. ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ - "ಭೀಮ ದುರ್ಯೋಧನರ ಕಾಳಗವನ್ನು ನಿಮ್ಮದೇ ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com2tag:blogger.com,1999:blog-34086622.post-58664405624982242952007-01-05T10:48:00.000+13:002007-01-05T10:49:48.323+13:00ನನಸಾಗುವುದಿಲ್ಲ ಏಕೀ ಕನಸುಗಳು?ಏನೆಲ್ಲ ಕಲ್ಪನೆಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;ಬದುಕೆಂದರೆ ಶುಭ್ರ, ವಿಶಾಲ, ತಿಳಿನೀಲಿ ಬಾಂದಳದಂತೆ,ಗರಿಗೆದರಿ ಮನದುಂಬಿ ಹಾರಾಡಬಹುದಾದ ಆಂಗಣದಂತೆ,ಬದುಕೆಂದರೆ ಅನಂತ, ನಿಗೂಢ, ತಾರೆಗಳ ತೋಟದಂತೆ.ಏನೆಲ್ಲ ಕನಸುಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;ವಿಜ್ಞಾನಿಯಾಗಿ ಹೊಸತೇನನ್ನೋ ಕಂಡುಹಿಡಿದಂತೆ,ಗಗನಯಾತ್ರಿಯಾಗಿ ತಿಂಗಳನ ಅಂಗಳದಿ ನಡೆದಾಡಿದಂತೆ,ಹಿಮಕವಿದ ಉನ್ನತ ಗಿರಿ-ಶಿಖರಗಳನ್ನು ಮೆಟ್ಟಿ ನಿಂತಂತೆ!ಏನೆಲ್ಲ ತುಡಿತಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;ಹತ್ತು ಮಂದಿಗೆ ಪಾಠ ಕಲಿಸುವ ಗುರುವು ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com2tag:blogger.com,1999:blog-34086622.post-35084469556098459842007-01-05T10:42:00.000+13:002007-01-05T11:18:22.638+13:00ಬೆಳ್ಳಿತೆರೆಯ ಬಂಗಾರದ ಮನುಷ್ಯನಿಗೊಂದು ನುಡಿನಮನಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;ನೀವು ಕಟ್ಟಿಕೊಟ್ಟ ಬಣ್ಣ-ಬಣ್ಣದ ಕನಸುಗಳಿಗಿದು ನನ್ನ ನುಡಿ ನಮನ.ಸಾಧು-ಸಂತರಿಗೆ, ಇತಿಹಾಸದ ರಾಜರಿಗೆ ಜೀವ ತುಂಬಿದಿರಿ ನೀವು;ಕನಕನಾಗಿ ಬಾಗಿಲನು ತೆರೆಯೆಂದು ಬೇಡಿದಾಗ ತಳಮಳಿಸಿದ್ದು ನಾವು.ಕಾಳಿದಾಸನ "ಮಾಣಿಕ್ಯ ವೀಣೆ"ಯನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ;ರಣಧೀರ, ಕೃಷ್ಣದೇವರಾಯರಂತೂ ಸದಾ ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-35508368161255989252006-12-27T11:40:00.000+13:002007-01-05T10:52:46.537+13:00ಅಪ್ಪನ ನೆನಪು("ಫಾದರ್ಸ್ ಡೇ" ಸಂದರ್ಭದಲ್ಲಿ ನನ್ನ ಅಪ್ಪನನ್ನು ನೆನೆಯುತ್ತಾ ಈ ಕವನ. ದುರದೃಷ್ಟವಶಾತ್ ಅವರು ಬಹಳ ಬೇಗ ನನ್ನಿಂದ ಭೌತಿಕವಾಗಿ ದೂರವಾದರೂ ಮಾನಸಿಕವಾಗಿ ಇನ್ನೂ ಅಷ್ಟೇ ಹತ್ತಿರವಾಗಿಯೇ ಉಳಿದಿದ್ದಾರೆ).ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,ನಿಮ್ಮಿಂದಾಗಿಯೆ ಕಲಿಕೆಯಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-1914771740261690822006-12-27T11:26:00.000+13:002007-01-05T10:40:54.479+13:00ಕೆಲವು ಹನಿಗವನಗಳು - 21 ಡಿಸೆಂಬರ್ 2006ಭೌತಶಾಸ್ತ್ರದ ನಿಯಮವಾಯಿತು ಸುಳ್ಳು************************************ಭೌತಶಾಸ್ತ್ರದ ನಿಯಮವೊಂದು ಹೇಳುತ್ತದೆಹತ್ತಿರ ಬಂದಷ್ಟೂ ವಸ್ತುಗಳ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ.ಕನ್ನಡಿಗರ ವಿಷಯದಲ್ಲಿ ಇದು ಸುಳ್ಳು ಬಿಡಿ,ಕರುನಾಡಿಗೆ ಹತ್ತಿರವಾದಷ್ಟೂ ಕನ್ನಡ ಪ್ರೇಮ ಕಡಿಮೆಯಾಗುತ್ತದೆ!ತುಂಬಲಾರದ ನಷ್ಟ!************************************ಬದುಕಿದ್ದಾಗ ಪರಸ್ಪರ ಎರಡು ಮಾತನಾಡಲೂ ಕಷ್ಟ;ಆದರೆ ಮಡಿದ ಕೂಡಲೇ ಅದು ತುಂಬಲಾರದ ನಷ್ಟ!ಇದು ಎಂಥ ಲೋಕವಯ್ಯ? ಅಂದ ಬೆನಕಯ್ಯ.ಪ್ರಜೆಗಳುಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-1157841333744748912006-09-10T10:32:00.000+12:002007-01-05T10:46:07.266+13:00ಇದು ಎಂತಹ ಅದ್ಭುತ!ಇಲ್ಲಿಯೇ ಹತ್ತಿಪ್ಪತ್ತು ವರ್ಷಗಳಿಂದ ಇದ್ದರೂ,ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ,ಕಷ್ಟಪಟ್ಟು ಕನ್ನಡ ಉಲಿಯುವ ನಮ್ಮೀ ಬೆಡಗಿ;ಪಕ್ಕದೂರಿಂದ ಕರೆಬಂದ ಕೂಡಲೇ ಶ್ರಮವಹಿಸಿಆ ಭಾಷೆ ಕಲಿತು, ಸೊಗಸಾಗಿ ನುಡಿಯುವ ಪರಿಎಂತಹ ಅದ್ಭುತವಯ್ಯಾ - ಎಂದ ಬೆನಕಯ್ಯ!ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-1157841075687611702006-09-10T10:24:00.000+12:002007-01-05T10:46:31.245+13:00ಆಧುನಿಕ ಯಕ್ಷಪ್ರಶ್ನೆ"ದಿನದಿನವೂ ಸಾಯುವವರ ಮಧ್ಯೆ ಇದ್ದರೂನಾವು ಅಮರರು ಅನ್ನುವಂತೆ ಬದುಕುವ ನರರುದೊಡ್ಡ ಸೋಜಿಗ" ಅಂತಂದರು ವೇದವ್ಯಾಸರು."ಅದು ತುಂಬಾ ಹಳೆಯ ಕತೆ ಬಿಡಿ; ವರ್ಷಕ್ಕೊಮ್ಮೆಕೋಟಿಯಂತೆ, ಐದಾರೂ ವರ್ಷ ಹಣ ಹರಿಸಿದರೂಗುಂಡಿಗಳಿಂದ ತುಂಬಿರುವ ನಮ್ಮೂರಿನ ರಸ್ತೆಗಳುಇನ್ನೂ ದೊಡ್ಡ ಸೋಜಿಗ" ಎಂದ ಬೆನಕಯ್ಯ!ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-1157840641277969942006-09-10T10:22:00.000+12:002007-01-05T10:46:54.643+13:00ಕನ್ನಡ ಪ್ರೇಮಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ,ಆದರ ಪೂಜ್ಯ ಭಾವನೆ;ಹಾಗಾಗಿಯೇ ಅದನ್ನು ಬಳಸುವುದೂ ಕಡಿಮೆ,ಪೂಜಿಸುತ್ತೇವೆ ಸುಮ್ಮನೆ! ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-1157840395612368602006-09-10T10:16:00.000+12:002007-01-05T10:47:14.723+13:00ಅಡುಗೆ ಮಾಡುವ ವಿಧಾನಊರಿಗೆ ಹೋಗುವ ಮುನ್ನ ಹೇಳಿಕೊಡುತ್ತಿದ್ದಳುಹೆಂಡತಿ ತನ್ನ ಗಂಡನಿಗೆ ಅಡುಗೆ ಮಾಡಲು;ಹೀಗೆ ಮಾಡಿ, ಇದು ಆಮೇಲೆ, ಅದು ಮೊದಲು...ಅರ್ಧಕ್ಕೇ ತಡೆದು ಕೇಳಿದ ಗಂಡ ಅವಳನ್ನು,ಅದೆಲ್ಲ ಬಿಡು ಹೇಗೋ ಮಾಡಿಬಿಡಬಹುದು,ಹೇಳು, ಯಾವಾಗ ಹಾಕಬೇಕು ಕೂದಲು?!ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com3tag:blogger.com,1999:blog-34086622.post-1157757861810048132006-09-09T11:20:00.000+12:002007-01-05T10:47:37.833+13:00ಇಂದಿನ ನಿತ್ಯೋತ್ಸವ : ಕಹಿ ಸತ್ಯೋತ್ಸವ(ಕವಿ ಶ್ರೀ. ನಿಸಾರ್ ಅಹಮದ್ ಅವರ ಕ್ಷಮೆ ಕೋರಿ)ಬತ್ತಿ ನಿಂತ ಜೋಗದಲ್ಲಿ, ಸೊರಗಿ ಹರಿವ ತುಂಗೆಯಲ್ಲಿ,ದಿನ ದಿನವೂ ನಶಿಸುತಿರುವ ಸಹ್ಯಾದ್ರಿಯ ಶಿಖರಗಳಲಿ,ಚಿತ್ರಪಟಗಳಲ್ಲಿ ಮಾತ್ರ ಕಾಣಸಿಗುವ ಕಾಡುಗಳಲಿ,ನಿತ್ಯೋತ್ಸವ, ತಾಯೆ ನಿತ್ಯೋತ್ಸವ,ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!ಇತಿಹಾಸವ ದೂರ ತಳ್ಳಿ, ಸ್ವಾಭಿಮಾನಕಿಟ್ಟು ಕೊಳ್ಳಿ,ಮಾತೃಭಾಷೆಯನ್ನೆ ಮರೆತು, ಅನ್ಯಭಾಷೆಯೆಲ್ಲ ಕಲಿತು,ಬೀಗುತಿರುವ ಕೋಟಿ ಕೋಟಿ ನಾಡಜನರ 'ಸ್ಪೀಚು'ಗಳಲಿ,ನಿತ್ಯೋತ್ಸವ, ತಾಯೆ ನಿತ್ಯೋತ್ಸವ,ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com0tag:blogger.com,1999:blog-34086622.post-1157748844259482762006-09-09T08:50:00.000+12:002006-12-24T09:20:40.903+13:00ಗಜಮುಖನೆ ಗಣಪತಿಯೇ ನಿನಗೆ ವಂದನೆನನ್ನದೇ ಒಂದು ರೇಖಾಚಿತ್ರದ ಮೂಲಕ ಗಣಪತಿಗೆ ನಮಿಸಿ ಬ್ಲಾಗಿಸಲು ಆರಂಭಿಸುತ್ತಿದ್ದೇನೆ. ಶ್ಯಾಮ್ ಕಿಶೋರ್http://www.blogger.com/profile/07296158443097537253noreply@blogger.com2